ಅನುಭವದ ಬುತ್ತಿ
ಸತತವಾಗಿ ಏಳು ದಿನಗಳಿಂದ ಸರ್ವಂ ಸಂಘಮಯವಾದ ವಾತಾವರಣದಲ್ಲಿ ನಡೆದ ಸಂಘದ ಪ್ರಾಥಮಿಕ ಶಿಕ್ಷಾ ವರ್ಗದ ಶಾರೀರಿಕ , ಮಾನಸಿಕ ಮತ್ತು ಬೌದ್ಧಿಕ ಅದೇ ರೀತಿ ವ್ಯಕ್ತಿ , ಪರಿವಾರ , ಸಮಾಜ ಮತ್ತು ದೇಶದ ಕುರಿತಾದ ಅನುಭವದ ಬುತ್ತಿಯನ್ನು ಎಲ್ಲರಿಗೂ ಹಂಚುವ ಪ್ರಯತ್ನ , ಅನುಭವಿಸಿದವರು ಮೆಲಕು ಹಾಕಲಿ , ಅನುಭವ ಇಲ್ಲದವರು ಸಿಧ್ಧರಾಗಲಿ , ಆದರೆ ಸೇವೆ ಮಾತ್ರ ಯಾವುದಾದರೂ ಒಂದು ರೂಪದಲ್ಲಿ ನಿರಂತರವಾಗಿರಲಿ . ಸುವಿಚಾರಭರಿತ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ನಿರ್ಲಕ್ಷಿಸಿರುವುದು ಮತ್ತು ಅದಕ್ಕೆ ಕಾಲವನ್ನು ಹೊಣೆ ಮಾಡಿ ಸಮರ್ಥಿಸಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ , ಆದರೆ ನಿಜವಾಗಲೂ ಬದಲಾಗಿರುವುದು ಕಾಲವಲ್ಲ ನಮ್ಮ ಮನಸ್ಥಿತಿಯ ಮೇಲೆ ಪಾಶ್ಚಾತ್ಯರ ಕುತಂತ್ರ ಅನುಶಾಸನಗಳು . ದೇಶದ ಶಿಕ್ಷಣ ವ್ಯವಸ್ಥೆಯ ಹರಿಕಾರನು ಇತಿಹಾಸ , ಪರಂಪರೆ , ಸಂಸ್ಕೃತಿ ಮತ್ತು ಭೂಗೋಳಿಕ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿರಬೇಕು ಇಲ್ಲವಾದಲ್ಲಿ ಇವುಗಳ ಬಗ್ಗೆ ಗೌರವ ಉಳ್ಳವನಾಗಿರಬೇಕು . ಈ ವಿಷಯದಲ್ಲಿಸ್ವತಂತ್ರ ಪೂರ್ವದಿಂದಲೂ ದೇಶವನ್ನು ಹಾಳು ಮಾಡಲು ಬಂದ ಪರಕೀಯರ ಶಿಕ್ಷಣ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದ ಭಾ