ಅಲ್ಲಿಂದ ಇಲ್ಲಿಯವರೆಗೂ ಗುರುವಿನ ಗುರುವು ಸನಾತನ ಧರ್ಮವೇ
ಶ್ರೀ ಗುರುಭ್ಯೋ ನಮ: ಪ್ರಪಂಚದಾದ್ಯಂತ ಎಲ್ಲ ಮತಗಳ ಸ್ಥಾಪಕರನ್ನು,ಮತ ಪ್ರಚಾರಕರನ್ನು ಗೌರವ ನೀಡುವ ವಾಡಿಕೆ ಇದೆ,ಆದರೆ ಸನಾತನ ಧರ್ಮದಲ್ಲಿ ವಿಶೇಷವಾಗಿ ಆಧ್ಯಾತ್ಮಿಕ,ಧಾರ್ಮಿಕ ಮತ್ತು ಶೈಕ್ಷಣಿಕ ಗುರುಗಳನ್ನು ಒಟ್ಟಾರೆಯಾಗಿ ಪೂಜಿಸಲು ಮತ್ತು ಅವರ ಉಪದೇಶವನ್ನು ಸ್ಮರಿಸಿಕೂಳ್ಳುವ ಸತ್ಕಾರ್ಯಕ್ಕಾಗಿ, ಶುದ್ಧ ಆಷಾಡದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ.ಪ್ರಪಂಚದಾದ್ಯಂತ ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಇದೂಂದು ಹಬ್ಬವೇ ಸರಿ. ಇಲ್ಲಿ ಗುರು ಎಂದರೆ ಅಜ್ಞಾನದಿಂದ ಜ್ಞಾನದ ಕಡೆ,ಕತ್ತಲಿನಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುವುದು ಎಂದರ್ಥ. ಲೌಕಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಜೀವನಕ್ಕೆ ಬೇಕಾದ ಅರಿವನ್ನು ಮೂಡಿಸಲು ಗುರು ಬೇಕೇ ಬೇಕು. ಸಾಹಿತ್ಯ ಸಂಪತ್ತನ್ನು ಗಮನಿಸಿದಾಗ ಗುರುವಿನ ಬಗ್ಗೆ ಉಲ್ಲೇಖಿಸಿದ ಕೆಲವೊದು ಉದಾಹರಣೆಗಳನ್ನು ಮತ್ತು ಅದರಲ್ಲಿರುವ ಸೂಕ್ಷ್ಮ ವಿಚಾರದ ಆಳ ತಿಳಿಯುತ್ತದೆ. 1)ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೇ ಮೊದಲ ಗುರು--ಗಾದೆ ಮಾತು. 2)ಗುರು ಬ್ರಹ್ಮ,ಗುರು ವಿಷ್ಣು,ಗುರು ದೇವೋ ಮಹೇಶ್ವರ. ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರುವೇ ನಮ:-ಆದಿ ಶಂಕರಾಚಾರ್ಯರು. 3) ಗುರುವಿನ ಗುಲಾಮನಾಗದೇ ದೂರೆಯದಣ್ಣ ಮುಕುತಿ-ಪುರಂದರ ದಾಸರು.ಹಾಗೆಯೇ, 4)ವಚನಕಾರರು ಸಾವಿರಾರು ವಚನಗಳನ್ನು ತಮ್ಮ ಗುರುಗಳ ಅಂಕಿತನಾಮಕ್ಕೆ ಅರ್ಪಿಸಿರುವುದು. 5)ರಾಜರು ಆಸ್ಥಾನ ಗುರುಗಳ ಆಶೀರ್ವಾದ