Posts

Showing posts from August, 2021

ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃl

Image
ಸದಾ ಹಚ್ಚ ಹಸಿರಿನಿಂದ, ನಿತ್ಯ ಹರಿದ್ವರ್ಣದಂತೆ ಕಾಣುವ ವನದೇವಿ.ಅಲ್ಲಲ್ಲಿ ಹಾಲಿನಂತೆ ಹರಿಯುತ್ತಿರುವ ಜಲಧಾರೆಗಳು.ತಮ್ಮ ದಾರಿಯನ್ನು ಹುಡುಕಿಕೊಂಡು ಮೈತುಂಬಿ ಹರಿಯುತ್ತಿರುವ ಜೇವನದಿಗಳು.ಸುಕೋಮಲವಾಗಿ ಅರಳಿರುವ ಬಣ್ಣ ಬಣ್ಣದ  ಪುಷ್ಪಗಳು, ಮೈತುಂಬಿ ನಿಂತ ಫಲ ವೃಕ್ಷಗಳು. ಪ್ರಕೃತಿಗೆ ತಾವೇ ಒಡೆಯರೆಂಬಂತೆ ಸ್ವಚ್ಛಂದವಾಗಿ ಹಾರಾಡುತ್ತಿರುವ ಪಕ್ಷಿ ಸಂಕುಲ.ಇವೆಲ್ಲದರ ಜೊತೆಗೆ ಯಾವ ಹಂಗಿಲ್ಲದೆ ಬದುಕುತ್ತಿರುವ ಪ್ರಾಣಿಗಳು, ಇದು ಸಮೃದ್ಧಿಯಾದ "ವಸುಧಾ" ರಾಜ್ಯದ ಚಿತ್ರಣ.  ಇನ್ನು ಇಲ್ಲಿನ ಜನರೋ ಪ್ರಕೃತಿ ಮಿತ್ರರು ಹಾಗು ಸತ್ಯ,ಧರ್ಮ, ನಿಷ್ಠೆ, ನೀತಿ ಮತ್ತು ನ್ಯಾಯಗಳನ್ನು ಪರಿಪಾಲಿಸುತ್ತ ನಮ್ಮದಿಯ ಜೀವನ ನಡೆಸುವುವರು.    ಇಲ್ಲಿ ವಾಸಿಸುತ್ತಿರುವ "ಹರ್ಷಗೀತ" ಎಂಬ ಕುಟುಂಬದಲ್ಲಿನ ಬಾಲಕನ ಹೆಸರು "ಜಂಬುನಾಥ". ಅವನ ತಂದೆ-ತಾಯಿ,ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ - ದೊಡ್ಡಮ್ಮ, ಅಕ್ಕ, ತಂಗಿ,ಅಣ್ಣ,ತಮ್ಮ ಒಟ್ಟಾರೆಯಾಗಿ ಹನ್ನೊಂದು ಜನ ನೆಮ್ಮದಿಯ ಸಹಬಾಳ್ವೆ ನಡೆಸುತ್ತಿದ್ದರು, ಅವರ ಜೊತೆ ತಲ ತಲಮಾರುಗಳಿಂದ ಕೆಲಸ ಮಾಡುತ್ತಿದ್ದ "ರಹೀಮನ" ಕುಟುಂಬ ಅವನ ಮಗ "ಉಮರ್" ಮತ್ತು ಮಡದಿ "ರುಬಿಯಾ". ಹರ್ಷಗೀತ ಕುಟುಂಬದ ಪಕ್ಕದಲ್ಲಿ ವಾಸವಾಗಿದ್ದ "ಕೃಪಾಕರ್" ಜಂಬುನಾಥನ ಸ್ನೇಹಿತ ಅವನ ಮನೆಯಲ್ಲಿ ಅವನ ತಂದೆ ತಾಯಿ ಮತ್ತು ಅವನು ಅಷ್ಟೇ. ಅವರ ಮತ್ತು ಹರ್ಷಗ

ವೈಚಾರಿಕತೆಯ ಸವಾರಿ

ವ್ಯವಸ್ಥೆಯೇ ಅವ್ಯವಸ್ಥೆಯ ಆಗರ,  ಸಾಗುತಿದೆ ತಿಳಿಯದೇ ಜನ ಜಂಗುಳಿಯ ಸಾಗರ, ಅರಾಜಕತೆ,ಅಸಮಾನತೆ,ಅನ್ಯಾಯ,ಅಧರ್ಮ ಮತ್ತು ಅನಾಚಾರಗಳಿಗಿದೆ ಇಲ್ಲಿ ಬಗೆ ಬಗೆಯ ಆಕರ, ನೋಡುವವರ ದೃಷ್ಟಿಕೋನದಲ್ಲಿದೆ ಎಲ್ಲದರ ಆಧಾರ, ಸಾಬೀತು ಪಡಿಸಲು ಹೊರಟರೆ ಎಲ್ಲವೂ ನಿರಾಧಾರ, ಹೋರಾಟ ಒಂದೇ ನಿರಂತರ,ನಿರಂತರ. ಇಲ್ಲಿದೆ ಎಲ್ಲದಕ್ಕೂ ಬೇರೂಂದು ಆಯಾಮ,ಅರ್ಥ, ಪ್ರಧಾನ ಮಂತ್ರಿ - ಪ್ರಧಾನ ಸೇವಕ ಸಂವಿಧಾನ - ಸಮಾಜ ಶಾಸಕಾಂಗ- ಕಾರ್ಯಾಂಗ - ನ್ಯಾಯಾಂಗ ಜನನಾಯಕ - ಜನಸೇವಕ ಸಮಾಜ ಸೇವಕ - ಸಮಾಜ ಘಾತ ಸರ್ಕಾರಿ - ಖಾಸಗಿ ಅಧಿಕಾರ - ಸೇವೆ - ವ್ಯಾಪಾರ  ಬಲ ಪಂಥ - ಎಡ ಪಂಥ ಏಕೀಕರಣ - ವಿಭಾಗೀಕರಣ ಧರ್ಮ - ಅಧರ್ಮ- ಮತ ಹಿಂದೂ - ಅಹಿಂದೂ  ಗಾಂಧಿ - ಗೋಡ್ಸೆ ಕ್ರಮ - ಅಕ್ರಮ  ವಿಭಕ್ತ- ಅವಿಭಕ್ತ  ರಾಜಕೀಯ - ಅರಾಜಕೀಯ  ಶಿಕ್ಷಣ - ದೂರ ಶಿಕ್ಷಣ - ಅಶಿಕ್ಷಣ  ವಿದ್ಯೆ - ಅವಿದ್ಯೆ  ಶೃತಿ - ಸ್ಮೃತಿ ಪರಿಪಾಲಿಸುವ ಅರಿವೂ ಮಾತ್ರ ಅವರವರ ಭಾವತಹ ಭಕ್ತಿಗೆ ಬಿಟ್ಟದ್ದು, ಇಂದು ಯುವ ಭಾರತ,ಮಕ್ಕಳೊಂದು,ಎರಡು ಮಾತ್ರ ಸಾಕೆಂದಾಗ,ಭವಿಷ್ಯದ ಭಾರತ? ಬದಲಾವಣೆ,ಬೆಳವಣಿಗೆ ಸರಿ, ಆದರೆ ಅವುಗಳಿಗೆ ಕಾರ್ಯ ಯೋಜನೆ ತರಲು ಬೇಕಾದ ಅಧಿಕಾರ, ಅಧಿಕಾರ ಹಿಡಿಯುವ ಮಾರ್ಗ? ಸಿದ್ಧಾಂತಗಳು,ತತ್ವ,ವೇದ,ಉಪನಿಷತ್,ಶಾಸ್ಸ,ಪುರಾಣ,ವಚನ,ವಿಜ್ಞಾನಗಳು ಸರಿ ಎಂದು ಒಪ್ಪಿಕೊಳ್ಳುವುದರೂಳಗಾಗಿ ಸಮಾಜದ ಸರ್ವತೋಮುಖ ಅಭಿವೃದ್ಧಿಯ ಹಿನ್ನೆಲೆಯಿಂದ ಪರಿಷ್ಕರಣೆಯ ಕೂರತೆಯಲ್ಲಿರುವ ಸಂವಿಧಾನದ ಪರಿಪಾಲನೆ ನಾಗರಿಕನ ಕರ್ತವ್ಯ