"ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ " ಭಾಗ ೨
ಶೈಕ್ಷಣಿಕ ವ್ಯ್ವವಸ್ಥೆಯನ್ನು ಗಮನಿಸಿದಾಗ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಯ ಬೆಳವಣಿಗೆಯ ಫಲಿತಾಂಶ ಮಾತ್ರ ನಮ್ಮ ಜನಸಂಖ್ಯೆಯ ನಿರೀಕ್ಷಿತ ಮಟ್ಟವನ್ನು ಕಳೆದ ೩ ತಲೆಮಾರುಗಳಿಂದ ನೋಡಲೇ ಇಲ್ಲ ಆದರೆ ಪ್ರಾಮಾಣಿಕ ಪ್ರಯತ್ನಗಳು ಆಗಿಲ್ಲ ಎಂಬ ಅರ್ಥದಲ್ಲಿ ಅಲ್ಲ . ಇಲ್ಲಿ ಉಲ್ಲೇಖಿ ಸಲಿರುವ ಶಿಕ್ಷಕ ಪದ , ವಿದ್ಯಾರ್ಥಿಯ ಪೂರ್ಣ ಶೈಕ್ಷಣಿಕ ಜೀವನದಲ್ಲಿ ಪಾತ್ರವಹಿಸಿದ ಎಲ್ಲರಿಗೂ ಸಂಬಂಧಿಸಿದ್ದಾಗಿದೆ . ಪ್ರಸ್ತುತ ವ್ಯವಸ್ಥೆಯಲ್ಲಿಶಿಕ್ಷಣ ಎಂದಾಗ , ವಿದ್ಯಾರ್ಥಿ ಮತ್ತು ಶಿಕ್ಷಕರ ಜೊತೆಗೆ ಒಂದು ವ್ಯವಸ್ಥೆಯ ಅಥವಾ ಚೌಕಟ್ಟಿನ ಪರಿಕಲ್ಪನೆ ಇದೆ ಹಾಗು ಆ ಚೌಕಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳಲ್ಲದೆ ಹಲವರು ಭಾಗಿಯಾಗಿದ್ದು , ಅವರೆಲ್ಲರನ್ನು ನಿಭಾಯಿಸಿಕೊಂಡು , ಪಠ್ಯಕ್ರಮದಲ್ಲಿ ವಿಷಯವನ್ನು ಹೇಳಿಕೊಡುವ ವಾತಾವರಣ ನಿರ್ಮಾಣವಾಗಿದೆ . ಬದಲಾವಣೆಗೆ ಹೊಂದಿಕೊಳ್ಳುವ ದೃಢತೆ ಮತ್ತು ಸಂಕಲ್ಪ ಮಾಡುವ ಮನಸ್ಥಿತಿ ಬರಬೇಕಾಗಿದೆ . ಬದಲಾವಣೆಯನ್ನು ಸ್ವೀಕರಿಸುವ ಮನಸ್ಸಿಗೆ ವಿರೋಧ ಒಡ್ಡುವ ಅಂಶಗಳ ಮೂಲವನ್ನು ಹುಡುಕಿದಾಗ ಸಿಗುವ ಬೇರುಗಳು , ಮನುಷ್ಯನ ಮೆದುಳಿನ ಒಳಗಿರುವ ನರಮಂಡಲದ ರಚನೆಗಿಂತ ಕ್ಲಿಷ್ಟಕರವಾಗಿವೆ . ಒಂದು ಹಂತದಲ್ಲಿ , ಶಿಕ್ಷಕನ ಸ