ಹಳ್ಳಿ ಹುಡುಗ...ನಿ(ರಂಜ)ನ ಭಾಗ 1.
![Image](https://lh3.googleusercontent.com/-UK0CZyuIvyk/YYOH64MI92I/AAAAAAAAIL0/GgbCukeLCcISvoCznRez7xSzdg9Jg9bjgCLcBGAsYHQ/s1600/1636009957024636-0.png)
ಕೊನೆಗು ಬಂದೇ ಬಿಟ್ಟಿತು, ಶಾಮಿಯಾನ,ಕುರ್ಚಿ,ದೊಡ್ಡ ಪರದೆಯಿಂದ ಅಲಂಕೃತವಾದ, ರಾಜ್ಯದ ಎಲ್ಲ ಕಡೆಯಿಂದ ಬಂದ ವಿದ್ಯಾರ್ಥಿ ಮತ್ತು ಪೋಷಕರ ಕನಸುಗಳನ್ನು ನನಸು ಮಾಡಲೆಂದೇ ನಿರ್ಮಿಸಿರುವ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸಿ.ಇ.ಟಿ ಕಛೇರಿಯ ಮುಂದೆ ನಿಲ್ಲುವ ದಿನ. ಆತಂಕಗೊಂಡ ಮಕ್ಕಳು ಮತ್ತು ಪೋಷಕರು,ಗಡಿ ಬಿಡಿಯಲ್ಲಿನ ಆಯೋಜಕರು, ಇವರ ನಡುವೆ ಕಾಲೇಜುಗಳ ಹಾಗು ಶಿಕ್ಷಣ ಸಾಲ ನೀಡುವ ಬ್ಯಾಂಕಿನ ಜಾಹಿರಾತುಗಳನ್ನು ನೀಡುತ್ತಿರುವ ವ್ಯಕ್ತಿಗಳು.ಇವೆಲ್ಲವನ್ನು ನೋಡಿ ಮಂಕಾದ ನಮ್ಮ ಹಳ್ಳಿ ಹುಡುಗ. ಕರ್ನಾಟಕದ ಒಂದು ಮೂಲೆಯಲ್ಲಿರುವ ಚಿಂಚನಕಟ್ಟೆ ಎಂಬ ಹಳ್ಳಿ, ಆಗ ತಾನೆ ವಿಜ್ಞಾನ ವಿಷಯದಲ್ಲಿ ಕಂಠಪಾಠ ಮಾಡಿ ಪಿಯುಸಿ ಪರೀಕ್ಷೆ ಮುಗಿಸಿದ ನಿರಂಜನ. ಒಂದು ಕಡೆ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಂದೆ,ಜೀವ ಬದುಕಿದರೆ ಸಾಕು ಎಂದು ಚಿನ್ನದ ಸರವನ್ನು ಮಾರಿ ಚಿಕಿತ್ಸೆಗೆ ಹಣ ಹೊಂದಿಸಿದ ತಾಯಿ,ಇವೆಲ್ಲದರ ಪರಿವೆ ಇಲ್ಲದೆ ಆಟ ಪಾಠದಲ್ಲಿ ಮಗ್ನವಾಗಿರುವ ತಂಗಿ.ಹೀಗಿರುವಾಗ ಇದಾವುದನ್ನು ಲೆಕ್ಕಿಸದೇ ವ್ಯಕ್ತಿಯ ಬೆಳವಣಿಗೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬ ನಂಬಿಕೆಯನ್ನಿಟ್ಟು ಆಸಕ್ತಿ ಮತ್ತು ಶ್ರದ್ಧೆಯಿಂದ ಶಕ್ತಿಗನುಸಾರವಾಗಿ ಓದಿ ಪ್ರಥಮ ದರ್ಜೆಯಲ್ಲಿ ಪಾಸಾದ ನಮ್ಮ ಹಳ್ಳಿ ಹುಡುಗ ನಿರಂಜನ. ಭವಿಷ್ಯದ ಬಗ್ಗೆ ಯಾವುದೇ ರೀತಿಯ ಮಾನಸಿಕ,ಆರ್ಥಿಕ ಸಿದ್ಧತೆಗಳಲ್ಲಿದಿರುವುದರ ಕಾರಣ, ಇವನ ಫಲಿತಾಂಶ ಕಂಡು ಸಲಹೆಗಾರರಾದವರು ಉಂಟು